
ದಾವಣಗೆರೆ ಜಿಲ್ಲೆಯ ವಿವಿಧೆಡೆ ರಾಣಿಖೇತ್ ಅಥವಾ ಕೊಕ್ಕರೆ ರೋಗದಿಂದ ನೂರಾರು ನಾಟಿಕೋಳಿಗಳು ಸಾವನ್ನಪ್ಪುತ್ತಿದ್ದು, ಸಾಕಾಣಿಕೆದಾರರಲ್ಲಿ ಆತಂಕ ಮೂಡಿಸಿದೆ.
ರಾಮಗೊಂಡನಹಳ್ಳಿಯ ಫಾರ್ಮ್ ಒಂದರಲ್ಲಿ ಒಂದೇ ದಿನ 850 ಕೋಳಿಗಳು ಮೃತಪಟ್ಟಿದ್ದು, ಪ್ಯಾರಾಮಿಕ್ಸೋವೈರಸ್ ಸೋಂಕಿನಿಂದ ಈ ರೋಗ ವೇಗವಾಗಿ ಹರಡುತ್ತಿದೆ.
ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ, ಕೋಳಿ ಮರಿಗಳಿಗೆ ಎಫ್-1 ಮತ್ತು ಲಸೋಟಾ ಲಸಿಕೆಗಳನ್ನು ತಪ್ಪದೇ ಹಾಕಿಸುವಂತೆ ಪಶುವೈದ್ಯರು ರೈತರಿಗೆ ಸೂಚಿಸಿದ್ದಾರೆ.