
ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಟ್ರಾಫಿಕ್ ಜಾಮ್ ಆಗದಂತೆ ಕೆಲಸ ಮಾಡುವ ಜೆಟ್ ಪ್ಯಾಚರ್ ಯಂತ್ರಕ್ಕೆ ಸಚಿವ ಕೃಷ್ಣಭೈರೇಗೌಡ ಚಾಲನೆ ನೀಡಿದರು.
ಈ ಯಂತ್ರವು ಟ್ರಾಫಿಕ್ ನಡುವೆಯೇ ಸ್ವಚ್ಛಗೊಳಿಸಿ ಗುಂಡಿಗಳನ್ನು ಕವರ್ ಮಾಡುವ ಸಾಮರ್ಥ್ಯ ಹೊಂದಿದ್ದು, ಪ್ರಾಯೋಗಿಕವಾಗಿ ನಗರದಲ್ಲಿ ಬಳಕೆಗೆ ತರಲಾಗಿದೆ.
ಭವಿಷ್ಯದಲ್ಲಿ ರಸ್ತೆ ಗುಂಡಿಗಳನ್ನು ವೈಜ್ಞಾನಿಕವಾಗಿ ಪತ್ತೆಹಚ್ಚಲು ಪ್ರಹಾರಿ ವಾಹನಗಳಿಗೆ ಡ್ಯಾಶ್ ಕ್ಯಾಮ್ಗಳನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ.