
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್ ಅವರ ಆಪ್ತ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿರುವುದು ದರ್ಶನ್ ಅವರಿಗೆ ಕಾನೂನು ಸಂಕಷ್ಟವನ್ನು ಹೆಚ್ಚಿಸಿದೆ.
ಜಾಮೀನು ಅರ್ಜಿ ರದ್ದಾಗಿರುವ ಹಿನ್ನೆಲೆಯಲ್ಲಿ, ಪತಿಯ ಒಳಿತಿಗಾಗಿ ವಿಜಯಲಕ್ಷ್ಮಿ ದರ್ಶನ್ ಅವರು ಮಂಗಳೂರಿನ ಮಂದಾರಬೈಲು ರಕ್ತೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಮತ್ತು ಖುದ್ದು ಹಾಜರಿ ಅರ್ಜಿ ರದ್ದಾದ ನಂತರ, ದರ್ಶನ್ ಅವರಿಗೆ ಸರಣಿ ಹಿನ್ನಡೆಗಳಾಗುತ್ತಿದ್ದು, ಇದೀಗ ದೈವಾರಾಧನೆಯ ಮೊರೆ ಹೋಗಿದ್ದಾರೆ.