
ಆಗಸ್ಟ್ 14ರಂದು ನಡೆದ ವಿಧಾನಪರಿಷತ್ ಕಲಾಪದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿದರು.
ಮೊದಲ ಬಾರಿ ಸಚಿವರಾಗಿ ವಿಧಾನಪರಿಷತ್ನ ಸಭಾನಾಯಕರಾಗಿರುವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಡಿಕೆ ಶಿವಕುಮಾರ್ ಅವರು 'ನಮ್ಮ ಹೊಸ ಹೀರೋ' ಎಂದು ಕರೆದರು.
ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಪರಿಚಯಿಸುವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಯತೀಂದ್ರ ಅವರ ಬೆನ್ನುತಟ್ಟಿ ಈ ವಿಶೇಷ ರೀತಿಯಲ್ಲಿ ಪರಿಚಯ ಮಾಡಿಕೊಟ್ಟರು.