
ಮಲೆನಾಡಿನಲ್ಲಿ ಜನವಿರೋಧಿಯಾದ ಕರಾಳ ಅರಣ್ಯ ಕಾಯ್ದೆಗಳು ಮತ್ತು ಕಸ್ತೂರಿರಂಗನ್ ವರದಿ ರದ್ದಾಗಬೇಕು ಎಂದು ಕರ್ನಾಟಕ ಜನಶಕ್ತಿ ಸಂಚಾಲಕ ಕೆ.ಎಲ್. ಅಶೋಕ್ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಕಸ್ತೂರಿರಂಗನ್ ವರದಿ ಜಾರಿಗೆ 7ನೇ ಕರಡು ಅಧಿಸೂಚನೆ ಹೊರಡಿಸಿರುವುದು ಮಲೆನಾಡಿನ ರೈತರಲ್ಲಿ ಆತಂಕ ಉಂಟುಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಸೆಕ್ಷನ್-4 ಜಾರಿ ಮೂಲಕ ಕೃಷಿ ಭೂಮಿ ಹಾಗೂ ಮನೆಗಳನ್ನು ಮೀಸಲು ಅರಣ್ಯ ಮಾಡುವುದನ್ನು ಖಂಡಿಸಿ, ಬಡವರಿಗೆ ಭೂಮಿ ಮತ್ತು ವಸತಿ ಹಕ್ಕನ್ನು ಖಾತ್ರಿಪಡಿಸಬೇಕು ಎಂದಿದ್ದಾರೆ.