
ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿಧಾಮದ ಹಾನೂರು ಬಫರ್ ಝೋನ್ನಲ್ಲಿ ಕಳೆದ ಒಂದು ವಾರದಲ್ಲಿ ಕಾಡುಗಳ್ಳರು ಎರಡು ಬಾರಿ ವನ್ಯಪ್ರಾಣಿಗಳನ್ನು ಬೇಟೆಯಾಡಿದ್ದಾರೆ.
ಸೆಪ್ಟೆಂಬರ್ 1ರಂದು ಉಡುತೊರೆ ಹಳ್ಳದ ಬಳಿ ಕಡವೆಯನ್ನು ಬೇಟೆಯಾಡಿದ ನಂತರ, ಇತ್ತೀಚೆಗೆ ಪಚ್ಚೆದೊಡ್ಡಿ ಗ್ರಾಮದಲ್ಲಿ ಗಂಡು ಜಿಂಕೆಯನ್ನು ಗುಂಡಿಕ್ಕಿ ಕೊಂದಿದ್ದಾರೆ.
ಅರಣ್ಯ ಸಿಬ್ಬಂದಿಯ ಜೀಪ್ ಶಬ್ದ ಕೇಳುತ್ತಿದ್ದಂತೆಯೇ ಕಾಡುಗಳ್ಳರು ಮೃತ ಜಿಂಕೆಯ ಎದೆ ಮತ್ತು ಕತ್ತಿನ ಭಾಗವನ್ನು ಕತ್ತರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.