
ನೇಪಾಳದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟ 675 ಮಂದಿಯ ಪೈಕಿ ಗುರುತು ಸಿಗದ ಶವಗಳನ್ನು ವೈಜ್ಞಾನಿಕವಾಗಿ ಸಮಾಧಿ ಮಾಡಲು ಸರ್ಕಾರ ನಿರ್ಧರಿಸಿದೆ.
ಪ್ರತಿ ಮೃತದೇಹಕ್ಕೆ ಯುನಿಕ್ ಐಡಿ ನೀಡಿ ಡಿಎನ್ಎ ಮಾದರಿ, ಫೋಟೋ ಸಂಗ್ರಹಿಸಿ ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದ್ದು, ಭವಿಷ್ಯದಲ್ಲಿ ಕುಟುಂಬಸ್ಥರು ಬಂದರೆ ಗುರುತಿಸಲು ಅನುಕೂಲವಾಗಲಿದೆ.
ಈ ದುರಂತದಲ್ಲಿ ಭಾರತೀಯರು ಸೇರಿದಂತೆ ಒಟ್ಟು 2,426 ಜನರು ನಾಪತ್ತೆಯಾಗಿದ್ದು, ಅತಿ ಹೆಚ್ಚು 233 ಮೃತದೇಹಗಳು ಚಿತ್ವಾನ್ ಜಿಲ್ಲೆಯಲ್ಲಿ ಪತ್ತೆಯಾಗಿವೆ.