
ಬಾಗಲಕೋಟೆಯಲ್ಲಿ ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಮತ್ತು ಜಿಲ್ಲಾಧ್ಯಕ್ಷ ಎಸ್. ಜಿ. ನಂಜಯ್ಯನಮಠ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಸಚಿವ ಸ್ಥಾನ ಹಂಚಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.
ವೈರಲ್ ಆಡಿಯೋದಲ್ಲಿ ಸಚಿವ ಸ್ಥಾನಗಳಿಗೆ ಶೇ 80 ರಷ್ಟು ಪೇಮೆಂಟ್ ಸೀಟ್ ವ್ಯವಹಾರ ನಡೆದಿದೆ ಎಂದು ನಾಯಕರು ಚರ್ಚಿಸಿದ್ದು, ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿದ್ದನ್ನು ಪ್ರಶ್ನಿಸಿದ್ದಾರೆ.
ಈ ಆಡಿಯೋ ವೈರಲ್ ಆದ ಬೆನ್ನಲ್ಲೇ, ಹೈಕಮಾಂಡ್ ನಡವಳಿಕೆಯನ್ನು ಖಂಡಿಸಿ ನಾಲ್ಕಕ್ಕೂ ಹೆಚ್ಚು ಶಾಸಕರು ದೂರು ಪತ್ರ ಬರೆಯಲು ನಿರ್ಧರಿಸಿದ್ದು, ಆರ್. ಬಿ. ತಿಮ್ಮಾಪುರ ಈಗಾಗಲೇ ಸಹಿ ಹಾಕಿದ್ದಾರೆ.