
ಆಂಧ್ರಪ್ರದೇಶದ ಕಾಕಿನಾಡದಲ್ಲಿ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಪರಿಸರ ಸ್ನೇಹಿ ಹಾಗೂ ವಿಶಿಷ್ಟ ಮಾದರಿಯ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತರು ಗಮನ ಸೆಳೆದಿದ್ದಾರೆ.
ಕಾಕಿನಾಡದ ಉಲ್ಲಿಂಕಲ ವಾರಿ ವೀಧಿಯಲ್ಲಿ ಪಿಒಪಿ ಬಳಸದೆ 200 ಕೆಜಿ ಒಣ ಕೀವಿ ಹಣ್ಣುಗಳನ್ನು ಬಳಸಿ ಗಣೇಶ ಮೂರ್ತಿ ತಯಾರಿಸಲಾಗಿದ್ದು, ವಿಸರ್ಜನೆ ಬಳಿಕ ಇವನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ.
ಜಮ್ಮಿಚೆಟ್ಟು ಸೆಂಟರ್ನಲ್ಲಿ ಬರೋಬ್ಬರಿ 500 ಕೆಜಿ ಉತ್ತಮ ಗುಣಮಟ್ಟದ ಗೋಡಂಬಿಯನ್ನು ಬಳಸಿ ಕಲಾತ್ಮಕವಾದ ಮತ್ತೊಂದು ಗಣೇಶ ಮೂರ್ತಿಯನ್ನು ನಿರ್ಮಿಸಲಾಗಿದೆ.