
ತೆಲಂಗಾಣದ ಮಹಬೂಬ್ನಗರದ ಜಡ್ಚರ್ಲಾ ಪಟ್ಟಣದಲ್ಲಿ ಸ್ಥಳೀಯರು ಅರಿಶಿನದ ಕೊಂಬುಗಳಿಂದ ಗಣೇಶನ ಮೂರ್ತಿಯನ್ನು ಸಿದ್ಧಪಡಿಸಿ ಪರಿಸರ ಸಂರಕ್ಷಣೆಯ ಸಂದೇಶ ಸಾರಿದ್ದಾರೆ.
ಕಳೆದ 15 ವರ್ಷಗಳಿಂದ ಈ ಪ್ರದೇಶದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಬಾರಿ ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಸುಮಾರು 40 ಕೆಜಿ ಅರಿಶಿನ ಕೊಂಬುಗಳು, ಹಿಟ್ಟು ಮತ್ತು ಗೋಣಿ ಚೀಲಗಳನ್ನು ಬಳಸಿ ಈ ಆಕರ್ಷಕ ಗಣೇಶ ಮೂರ್ತಿಯನ್ನು ತಯಾರಿಸಲಾಗಿದೆ.