
ನೆಲಮಂಗಲದ ಹರಿಶಿನಕುಂಟೆ ಬಳಿ ಭಿಕ್ಷುಕನಿಗೆ ಕಾಲಿನಿಂದ ಒದ್ದು ದರ್ಪ ಮೆರೆದ ಬಿಎಂಟಿಸಿ ಕಂಡಕ್ಟರ್ ಕೃಷ್ಣಮೂರ್ತಿಯನ್ನು ಸಂಸ್ಥೆ ಅಮಾನತುಗೊಳಿಸಿದೆ.
ಶಿವನ್ಪುರ ಡಿಪೋಗೆ ಸೇರಿದ ಬಸ್ ಸಂಖ್ಯೆ KA-57 F-1104 ರಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ.
ಘಟನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಿಸಿಟಿವಿ ದೃಶ್ಯಾವಳಿ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪಡೆದು ಇಲಾಖಾ ಮಟ್ಟದ ಸಮಗ್ರ ತನಿಖೆಗೆ ಬಿಎಂಟಿಸಿ ಆದೇಶಿಸಿದೆ.