
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 270 ದಾಟಿದ್ದು, 288 ಭಾರತೀಯ ಪ್ರಜೆಗಳು ನಾಪತ್ತೆಯಾಗಿರುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದೆ.
ನಾಪತ್ತೆಯಾದವರಲ್ಲಿ ತ್ರಿಶೂಲಿ-1 ಯೋಜನೆಯ 73 ಉದ್ಯೋಗಿಗಳು, ತಮಿಳುನಾಡಿನ 86 ಯಾತ್ರಿಕರು, ಕೇರಳದ 33 ನಾಗರಿಕರು ಹಾಗೂ ಪಶ್ಚಿಮ ಬಂಗಾಳದ 32 ಪ್ರವಾಸಿಗರು ಸೇರಿದ್ದಾರೆ.
ಭಾರತ ಸರ್ಕಾರವು ನೇಪಾಳಕ್ಕೆ 37.5 ಟನ್ ವೈದ್ಯಕೀಯ ಸಾಮಗ್ರಿಗಳು ಮತ್ತು ಆಹಾರ ಪದಾರ್ಥಗಳನ್ನು ರವಾನಿಸಿದ್ದು, ರಕ್ಷಣಾ ಕಾರ್ಯಾಚರಣೆಗಾಗಿ ವಿಶೇಷ ಕಂಟ್ರೋಲ್ ರೂಮ್ಗಳನ್ನು ತೆರೆದಿದೆ.