
ಚಿಕ್ಕಮಗಳೂರು ನಗರಸಭೆಯಲ್ಲಿ ಕುಡಿಯುವ ನೀರು, ಆಸ್ತಿ ತೆರಿಗೆ ಮತ್ತು ಬಾಡಿಗೆ ಸೇರಿ ಒಟ್ಟು 15 ಕೋಟಿ ರೂ. ತೆರಿಗೆ ಬಾಕಿ ಉಳಿದಿದ್ದು, ವಸೂಲಿಗೆ 5 ವಿಶೇಷ ತಂಡಗಳನ್ನು ರಚಿಸಲಾಗಿದೆ.
ಬಾಕಿ ಇರುವ 15 ಕೋಟಿ ರೂ.ಗಳಲ್ಲಿ ಕುಡಿಯುವ ನೀರಿನ ತೆರಿಗೆ 6 ಕೋಟಿ, ಆಸ್ತಿ ತೆರಿಗೆ 5 ಕೋಟಿ, ಮಳಿಗೆಗಳ ಬಾಡಿಗೆ 3 ಕೋಟಿ ಮತ್ತು ಉದ್ಯಮ ಪರವಾನಗಿ ಶುಲ್ಕ 1 ಕೋಟಿ ರೂ. ಸೇರಿದೆ.
ತೆರಿಗೆ ಪಾವತಿಸದಿದ್ದರೆ ಕುಡಿಯುವ ನೀರಿನ ಸಂಪರ್ಕ ಕಡಿತಗೊಳಿಸುವುದಲ್ಲದೆ, ಆಸ್ತಿ ಜಪ್ತಿ ವಾರೆಂಟ್ ಹೊರಡಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ಬಸವರಾಜು ಎಚ್ಚರಿಕೆ ನೀಡಿದ್ದಾರೆ.