
ಕರ್ನಾಟಕದ ರೈಲ್ವೆ ಯೋಜನೆಗಳನ್ನು ಕೇಂದ್ರ ಕಡೆಗಣಿಸಿದೆ ಎಂದು ಸಚಿವ ಎಂಬಿ ಪಾಟೀಲ್ ಆರೋಪಿಸಿದ್ದರೆ, ಪ್ರತಾಪ್ ಸಿಂಹ ಅವರು ರಾಜ್ಯದ 12 ಪ್ರಮುಖ ಯೋಜನೆಗಳ ಪಟ್ಟಿಯನ್ನು ಹಂಚಿಕೊಂಡು ತಿರುಗೇಟು ನೀಡಿದ್ದಾರೆ.
ಬೆಂಗಳೂರು ಸುತ್ತಮುತ್ತಲಿನ 288 ಕಿ.ಮೀ ಉದ್ದದ ವೃತ್ತಾಕಾರದ ರೈಲು ಯೋಜನೆ ಸೇರಿದಂತೆ ಹಲವು ಮಾರ್ಗಗಳ ವಿಸ್ತರಣೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.
ದೆಹಲಿ-ಹೌರಾ, ಮುಂಬೈ-ದೆಹಲಿ ಸೇರಿದಂತೆ ದೇಶದ 7 ಪ್ರಮುಖ ಮಾರ್ಗಗಳನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಹಿಂದೆ ಘೋಷಿಸಿದ್ದರು.