
ವಿಟಿಯು ಸಿಂಡಿಕೇಟ್ ಸದಸ್ಯ ದಿಲೀಪ್ ಕೃಷ್ಣ ಕಾನೂನು ಪರೀಕ್ಷೆಯಲ್ಲಿ ವಂಚನೆ ಎಸಗಲು ಅನಾರೋಗ್ಯದ ನಾಟಕವಾಡುತ್ತಿರುವುದು ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಪರೀಕ್ಷೆಯ ದಿನಗಳಲ್ಲಿ ಕುತ್ತಿಗೆ ಮತ್ತು ಕೈಗೆ ಬ್ಯಾಂಡೇಜ್ ಹಾಕಿಕೊಂಡು ನಟಿಸುತ್ತಿದ್ದ ದಿಲೀಪ್ ಕೃಷ್ಣ, ರಜೆ ದಿನಗಳಲ್ಲಿ ಯಾವುದೇ ಗಾಯವಿಲ್ಲದೆ ಸಭೆಗಳಲ್ಲಿ ಭಾಗವಹಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಯಲಹಂಕದ ದೀಕ್ಷಾ ಕ್ಲಿನಿಕ್ನ ಡಾಕ್ಟರ್ ಅರುಣ್ ಕುಮಾರ್ ಅವರಿಂದ ಸುಳ್ಳು ವೈದ್ಯಕೀಯ ವರದಿ ಪಡೆದು, ಪರೀಕ್ಷಾ ಕೇಂದ್ರದಲ್ಲಿ ಸಹಾಯಕರನ್ನು ಇಟ್ಟುಕೊಂಡು ಪರೀಕ್ಷೆ ಬರೆಯಲು ಅನುಮತಿ ಪಡೆದಿದ್ದರು.