
ತಮಿಳುನಾಡಿನ ಪ್ರಸಿದ್ಧ ತಿರುವಣ್ಣಾಮಲೈಯ ಅಣ್ಣಾಮಲೈಯರ್ ದೇವಾಲಯದ ಆವರಣದೊಳಗೆ ಪಾವಿತ್ರ್ಯತೆ ಕಾಪಾಡುವ ಉದ್ದೇಶದಿಂದ ಸೆಪ್ಟೆಂಬರ್ 1 ರಿಂದ ಮೊಬೈಲ್ ಫೋನ್ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಭಕ್ತರ ಮೊಬೈಲ್ ಫೋನ್ಗಳನ್ನು ಸುರಕ್ಷಿತವಾಗಿಡಲು ರಾಜಗೋಪುರ, ಅಮ್ಮನ್ ಗೋಪುರ ಮತ್ತು ತಿರುಮಂಜನ ಗೋಪುರಗಳ ಬಳಿ ಭದ್ರತಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಫೋನ್ಗೆ 5 ರೂ. ಶುಲ್ಕ ಪಾವತಿಸಿ ಟೋಕನ್ ಪಡೆಯಬಹುದು.
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಈ ನಿಯಮ ಜಾರಿಗೊಳಿಸಿದ್ದು, ನಿಯಮ ಮೀರಿ ಮೊಬೈಲ್ ಬಳಸಿದರೆ ಫೋನ್ ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಆಡಳಿತ ಮಂಡಳಿ ಎಚ್ಚರಿಸಿದೆ.