
ಹಿಂದಿನ ದಶಕಗಳಿಗೆ ಹೋಲಿಸಿದರೆ ಹಿಮಾಲಯದ ಹಿಮನದಿಗಳು ಶೇ. 65ರಷ್ಟು ಹೆಚ್ಚು ವೇಗವಾಗಿ ಕರಗುತ್ತಿದ್ದು, ಇದಕ್ಕೆ ವಾಯು ಮಾಲಿನ್ಯಕಾರಕ ಕಪ್ಪು ಇಂಗಾಲವೇ ಪ್ರಮುಖ ಕಾರಣ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ.
ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ 2100ರ ವೇಳೆಗೆ ಹಿಂದು ಕುಶ್ ಹಿಮಾಲಯದ ಶೇ. 80ರಷ್ಟು ಹಿಮನದಿಗಳು ನಾಶವಾಗಲಿದ್ದು, ಗಂಗಾ, ಯಮುನಾ ಹಾಗೂ ಸಿಂಧೂ ನದಿಗಳಲ್ಲಿ ಭಾರಿ ಜಲಕ್ಷಾಮ ಸೃಷ್ಟಿಯಾಗಲಿದೆ.
ಕಪ್ಪು ಇಂಗಾಲದ ಹೊರಸೂಸುವಿಕೆ ತಡೆ, 30 ಲಕ್ಷ ಹೆಕ್ಟೇರ್ ಕಾಡ್ಗಿಚ್ಚು ಪೀಡಿತ ಅರಣ್ಯ ನಿರ್ವಹಣೆ ಮತ್ತು ಪ್ರವಾಸೋದ್ಯಮ ನಿಯಂತ್ರಣಕ್ಕೆ ವರದಿಯು ಪ್ರಮುಖ ಶಿಫಾರಸುಗಳನ್ನು ಮಾಡಿದೆ.