
ಥಣಿಸಂದ್ರದಲ್ಲಿರುವ ಅನಲಿಟಿಕಲ್ ರಿಸರ್ಚ್ ಸೆಂಟರ್ನಲ್ಲಿ ಮಲಿನ ನೀರನ್ನು ಹೊರಬಿಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ ನೀಡಿದ್ದಾರೆ.
ಈ ಜಲ ಪರೀಕ್ಷಾ ಪ್ರಯೋಗಾಲಯವು ಎಸ್ಟಿಪಿ ಒಳಹರಿವು, ಹೊರಹರಿವು, ಕೆರೆ ನೀರು ಮತ್ತು ಅಂತರ್ಜಲ ಮಾದರಿಗಳನ್ನು ಪರೀಕ್ಷಿಸುತ್ತದೆ.
ಅಧಿಕಾರಿಗಳು ನೀರಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ ಎಂದು ಸಚಿವರಿಗೆ ಮಾಹಿತಿ ನೀಡಿದ್ದಾರೆ.