
ಒಡಿಶಾ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ಮುಳುಗಿರುವ ಪನಾಮ ಧ್ವಜವಿದ್ದ ಸರಕು ಸಾಗಣೆ ಹಡಗಿನ 22 ಸಿಬ್ಬಂದಿಗಾಗಿ ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಭಾರತೀಯ ನೌಕಾಪಡೆಯು ಭಾನುವಾರ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.
ಹಡಗಿನಲ್ಲಿ 24 ಮಂದಿ ಸಿಬ್ಬಂದಿ ಇದ್ದು, ಶನಿವಾರ ಭಾರತೀಯ ಕರಾವಳಿ ರಕ್ಷಣಾ ಪಡೆಯ ಮೂರು ಹಡಗುಗಳು ಮತ್ತು ಭಾರತೀಯ ನೌಕಾಪಡೆಯ ವಿಮಾನ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಚೀನಾ ಪ್ರಜೆಗಳನ್ನು ರಕ್ಷಿಸಲಾಗಿದೆ.
ಆಗಸ್ಟ್ 20 ರಂದು ಪಾರಾದೀಪ್ ಬಂದರಿನಿಂದ ಚೀನಾಕ್ಕೆ ಅದಿರು ಸಾಗಿಸುತ್ತಿದ್ದ 'ಎಂವಿ ಓಷನ್ ವಿನ್ನರ್' ಹಡಗಿನಲ್ಲಿ 20 ಚೀನಾ, 3 ಮ್ಯಾನ್ಮಾರ್ ಮತ್ತು 1 ಬಾಂಗ್ಲಾದೇಶದ ಪ್ರಜೆಗಳು ಇದ್ದರು.