
ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 11 ವಿಮಾನ ನಿಲ್ದಾಣಗಳನ್ನು 50 ವರ್ಷಗಳ ಅವಧಿಗೆ ಖಾಸಗೀಕರಣ ಮಾಡಲು ಕೇಂದ್ರದ ಪಿಪಿಪಿಎಸಿ ಸಮಿತಿ ತಾತ್ವಿಕ ಒಪ್ಪಿಗೆ ನೀಡಿದೆ.
ಈ ಯೋಜನೆಯಡಿ ಖಾಸಗಿ ಕಂಪನಿಗಳು ಒಟ್ಟು ₹8,600 ಕೋಟಿ ಹೂಡಿಕೆ ಮಾಡಲಿದ್ದು, ವಾರಾಣಸಿ, ಭುವನೇಶ್ವರ, ತಿರುಪತಿ ಸೇರಿದಂತೆ ಪ್ರಮುಖ ನಿಲ್ದಾಣಗಳು ಈ ಪಟ್ಟಿಯಲ್ಲಿವೆ.
ಈ ಪ್ರಸ್ತಾವನೆಗೆ ಅಂತಿಮ ಅನುಮೋದನೆ ದೊರೆತ ನಂತರ, ಅದನ್ನು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಮುಂದೆ ಮಂಡಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.