
ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗ ಎಂದು ಅಮೆರಿಕ ರಾಯಭಾರಿ ಸೆರ್ಗೋಯ್ ಗೊರ್ ಹೇಳಿಕೆ ನೀಡಿದ ಬೆನ್ನಲ್ಲೇ, ಪಾಕಿಸ್ತಾನವು ಅಮೆರಿಕ ರಾಯಭಾರಿ ನಟಾಲಿ ಬೇಕರ್ಗೆ ಸಮನ್ಸ್ ಜಾರಿಗೊಳಿಸಿದೆ.
ಪಾಕಿಸ್ತಾನದ ಈ ಕ್ರಮವನ್ನು ಭಾರತವು ಹತಾಶೆಯ ನಡೆ ಎಂದು ಕರೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ಯಾವುದೇ ಕಾರಣಗಳಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಬುಧವಾರ ನಡೆದ ಈ ರಾಜತಾಂತ್ರಿಕ ಬೆಳವಣಿಗೆಯು ಜಮ್ಮು ಮತ್ತು ಕಾಶ್ಮೀರದ ಕುರಿತಾದ ಅಮೆರಿಕದ ನಿಲುವಿನ ವಿರುದ್ಧ ಪಾಕಿಸ್ತಾನದ ಅಸಮಾಧಾನವನ್ನು ವ್ಯಕ್ತಪಡಿಸಿದೆ.