
ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದು, ಸರ್ಕಾರ ತನ್ನನ್ನು ತಾನೇ ಪಾಪರ್ ಎಂದು ಘೋಷಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರಿನ ಏಳು ಕಾರ್ಪೊರೇಷನ್ಗಳ ಪೈಕಿ ಐದು ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿವೆ ಎಂದು ಅವರು ಪ್ರತಿಭಟನೆಯ ವೇಳೆ ತಿಳಿಸಿದ್ದಾರೆ.
ಸರ್ಕಾರ ಹಣವಿಲ್ಲದೆ ಕಸ, ವಿದ್ಯುತ್, ಹಾಲು, ಮನೆಗಳ ಮೇಲೆ ತೆರಿಗೆ ವಿಧಿಸಿದ್ದು, ಈಗ ಕಾರುಗಳ ಮೇಲೂ ತೆರಿಗೆ ಹಾಕಲು ಮುಂದಾಗಿದೆ ಎಂದು ಅಶೋಕ್ ಟೀಕಿಸಿದ್ದಾರೆ.