
ಲಡಾಖ್ ಕೇಂದ್ರಾಡಳಿತ ಪ್ರದೇಶದ ನಿವಾಸಿಗಳಿಗೆ ಸ್ಥಳೀಯವಾಗಿ ನ್ಯಾಯಾಂಗ ಸೇವೆ ಒದಗಿಸಲು ಅಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ನೂತನ ಪೀಠವನ್ನು ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಪ್ರಸ್ತುತ ಶ್ರೀನಗರ ಮತ್ತು ಜಮ್ಮುನಲ್ಲಿ 2 ಪೀಠಗಳನ್ನು ಹೊಂದಿರುವ ಜಂಟಿ ಹೈಕೋರ್ಟ್ಗೆ ಇದು 3ನೇ ಪೀಠವಾಗಲಿದ್ದು, ಈ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಗಸ್ಟ್ 20 ರಂದು ತಮ್ಮ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಅಕ್ಟೋಬರ್ 31, 2019 ರಂದು ಲಡಾಖ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾದ ನಂತರವೂ ಜಂಟಿ ಹೈಕೋರ್ಟ್ ಹೊಂದಿದ್ದು, ಈ ಹೊಸ ಪೀಠದ ಸ್ಥಾಪನೆಯಿಂದಾಗಿ ಲೇಹ್ ಮತ್ತು ಕಾರ್ಗಿಲ್ ಪ್ರದೇಶದ ಜನರು ಕಾನೂನು ವ್ಯವಹಾರಗಳಿಗಾಗಿ ಹೊರಗೆ ಪ್ರಯಾಣಿಸುವುದು ತಪ್ಪಲಿದೆ.