
ಕರ್ನಾಟಕದ ಶಕ್ತಿಕೇಂದ್ರವಾದ ವಿಧಾನಸೌಧದಲ್ಲಿ ಹೊಸ ಸಚಿವರಿಗೆ ಕೊಠಡಿ ಹಂಚಿಕೆ ಮಾಡಿದ ಬೆನ್ನಲ್ಲೇ, ಕೇವಲ ಮೂರು ವರ್ಷಗಳ ಹಿಂದೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದ್ದ ಕೊಠಡಿಗಳನ್ನು ಮತ್ತೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ.
ಸುಮಾರು 75 ವರ್ಷಗಳ ಇತಿಹಾಸವಿರುವ ವಿಧಾನಸೌಧದ ಕಲ್ಲಿನ ಕಟ್ಟಡದ ಕೊಠಡಿಗಳ ವಿಸ್ತೀರ್ಣ ಹೆಚ್ಚಿಸಲು ಮಧ್ಯದ ಗೋಡೆಗಳನ್ನು ಒಡೆಯಲಾಗುತ್ತಿದ್ದು, ಇದು ಮೂಲ ವಾಸ್ತುಶೈಲಿಗೆ ಧಕ್ಕೆ ತರಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಸಚಿವ ಎಚ್.ಸಿ. ಬಾಲಕೃಷ್ಣ ಅವರಿಗೆ ಹಂಚಿಕೆಯಾದ 339ನೇ ಕೊಠಡಿ, ಕೆ.ಎಸ್. ಬಸವಂತಪ್ಪ ಅವರ 343ನೇ ಕೊಠಡಿ ಹಾಗೂ ವಿಕಾಸಸೌಧದಲ್ಲಿ ಬಸವರಾಜ ರಾಯರಡ್ಡಿ ಅವರ 406 ಮತ್ತು 407ನೇ ಕೊಠಡಿಗಳಲ್ಲಿ ನೆಲದ ಟೈಲ್ಸ್, ಸೀಲಿಂಗ್ ಮತ್ತು ವಿದ್ಯುತ್ ವ್ಯವಸ್ಥೆ ಬದಲಾಯಿಸುವ ಕಾಮಗಾರಿಗಳು ನಡೆಯುತ್ತಿವೆ.