
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ದೇಶದ 14 ರಾಜ್ಯಗಳಲ್ಲಿ ಮುಂದಿನ 15 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಆಗಸ್ಟ್ 16ರ ಬೆಳಿಗ್ಗೆ 8:30ರ ವೇಳೆಗೆ ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವಿದ್ದು, ಇದು 7.6 ಕಿ.ಮೀ ಎತ್ತರದವರೆಗೆ ಚಂಡಮಾರುತದ ಪರಿಚಲನೆಯನ್ನು ಹೊಂದಿದೆ.
ಆಗಸ್ಟ್ 18 ಮತ್ತು 20ರ ನಡುವೆ ಈ ಕಡಿಮೆ ಒತ್ತಡದ ಪ್ರದೇಶವು ಒಳನಾಡಿಗೆ ಚಲಿಸಲಿದ್ದು, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಮಧ್ಯಪ್ರದೇಶದಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ.