
ಕರ್ನಾಟಕ ಸರ್ಕಾರವು ತೋಟಗಾರಿಕೆ ಇಲಾಖೆಯ ಸರ್ಕಾರಿ ಉದ್ಯಾನಗಳ ರಕ್ಷಣೆ ಕಾಯಿದೆ-1975ಕ್ಕೆ ತಿದ್ದುಪಡಿ ತಂದು, ಉದ್ಯಾನಗಳ ಶೇ.5ರಷ್ಟು ಜಾಗವನ್ನು ವಾಣಿಜ್ಯ ಬಳಕೆಗೆ ಬಳಸಲು ಮುಂದಾಗಿದೆ.
ಈ ಮಸೂದೆಯಡಿ ಉದ್ಯಾನಗಳ ಜಾಗವನ್ನು ಮಾರಾಟ ಮಾಡಲು, ಗುತ್ತಿಗೆ ನೀಡಲು, ವಿನಿಮಯ ಮಾಡಲು ಅಥವಾ ಅಡಮಾನ ಇಡಲು ಸರ್ಕಾರಕ್ಕೆ ಅವಕಾಶ ಸಿಗಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಈ ಕ್ರಮವನ್ನು ರಿಯಲ್ ಎಸ್ಟೇಟ್ ಮಾಫಿಯಾದ ಲೂಟಿ ಎಂದು ಕರೆದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.