
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಭಾಗಿಯಾಗಿರುವ ಕಾಮನ್ ಮ್ಯಾನ್ ಸ್ಪರ್ಧಿಗಳ ನಡೆ ಹಾಗೂ ಅವರು ಬಿಗ್ ಬಾಸ್ ಆದೇಶಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಮನೆಯೊಳಗೆ ಚರ್ಚೆ ಶುರುವಾಗಿದೆ.
ಲೈಟ್ ಆಫ್ ಆಗುವ ಮುನ್ನ ನಿದ್ದೆ ಮಾಡಬಾರದು ಎಂಬ ನಿಯಮವನ್ನು ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಮುರಿದಿದ್ದು, ಬಿಗ್ ಬಾಸ್ ಅವರಿಗೆ ರಾತ್ರಿ ಮಲಗಲು ಬೆಡ್, ಬೆಡ್ಶೀಟ್ ಮತ್ತು ತಲೆದಿಂಬು ನೀಡದೆ ಕಠಿಣ ಶಿಕ್ಷೆ ವಿಧಿಸಿದ್ದಾರೆ.
ಶಿಕ್ಷೆಯ ನಂತರವೂ ಅವರು ಆದೇಶ ಲೆಕ್ಕಿಸದೆ ಧನುಷ್ ಅವರ ಬೆಡ್ ಮೇಲೆಯೇ ಬೆಡ್ಶೀಟ್ ಹೊದ್ದು ಮಲಗಿದ್ದು, ಈ ಬಗ್ಗೆ ವೀಕೆಂಡ್ನಲ್ಲಿ ಸುದೀಪ್ ಅವರಿಂದ ಕ್ಲಾಸ್ ಆಗುವ ಸಾಧ್ಯತೆಯಿದೆ.