
ಸಂವಿಧಾನದ 178 ಮತ್ತು 192ನೇ ವಿಧಿಗಳ ಪ್ರಕಾರ ಸ್ಪೀಕರ್ ಮತ್ತು ಸಭಾಪತಿಗಳನ್ನು ಸದನ ಆಯ್ಕೆ ಮಾಡುತ್ತದೆ ಎಂಬ ಕನಿಷ್ಠ ಜ್ಞಾನವಿಲ್ಲದೆ ಬಿಜೆಪಿ ಟೀಕಿಸುತ್ತಿದೆ ಎಂದು ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಮಾತ್ರ ಪ್ರಸ್ತಾಪಿಸಿದೆ, ಆಯ್ಕೆ ಮಾಡುವುದು ಸದನವೇ ಹೊರತು ಪಕ್ಷವಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬಿಜೆಪಿಯವರ ಆರೋಪಗಳನ್ನು ತಳ್ಳಿಹಾಕಿದರು.
ತಮ್ಮ ಮಂತ್ರಿಗಿರಿ ಕುರಿತ ಸುದ್ದಿಗಳು ದೊಡ್ಡ ಷಡ್ಯಂತ್ರ ಎಂದು ಹೇಳಿದ ಹರಿಪ್ರಸಾದ್, ಈ ಸಂದರ್ಭದಲ್ಲಿ ತಾನು ಮಂತ್ರಿಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.