
ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಕೇಂದ್ರ ವಲಯವನ್ನು 4 ವಿಕೆಟ್ಗಳಿಂದ ಸೋಲಿಸುವ ಮೂಲಕ ಪೂರ್ವ ವಲಯ ತಂಡವು 13 ವರ್ಷಗಳ ನಂತರ ದುಲೀಪ್ ಟ್ರೋಫಿ ಫೈನಲ್ ಪ್ರವೇಶಿಸಿದೆ.
ಎರಡನೇ ಇನಿಂಗ್ಸ್ನಲ್ಲಿ ಕೇಂದ್ರ ವಲಯವನ್ನು 158 ರನ್ಗಳಿಗೆ ಕಟ್ಟಿಹಾಕಿದ ಪೂರ್ವ ವಲಯವು, 39.3 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿ ಜಯ ಸಾಧಿಸಿತು.
ಪೂರ್ವ ವಲಯದ ಬೌಲರ್ಗಳಾದ ಮುಕೇಶ್ ಕುಮಾರ್ 44 ರನ್ಗಳಿಗೆ 4 ವಿಕೆಟ್ ಮತ್ತು ಮೊಹಮ್ಮದ್ ಶಮಿ 56 ರನ್ಗಳಿಗೆ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.