
ಕೃಷಿ ವಲಯಕ್ಕೆ ನೀಡಿದ ಸಾಲದಲ್ಲಿ ಎನ್ಪಿಎ ಪ್ರಮಾಣವು ಹಿಂದೆ ಎರಡು ಅಂಕಿಯಲ್ಲಿದ್ದು, ಈಗ ಒಂದು ಅಂಕಿಯ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ನಬಾರ್ಡ್ ಅಧ್ಯಕ್ಷ ಶಾಜಿ ಕೃಷ್ಣನ್ ತಿಳಿಸಿದ್ದಾರೆ.
ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ರೈತರ ಹಣಕಾಸಿನ ಶಕ್ತಿಯನ್ನು ಬಲಪಡಿಸಲು ಮತ್ತು ಸಾಲ ವಿತರಣೆಯನ್ನು ಸುಧಾರಿಸಲು ನಬಾರ್ಡ್ ಕೆಲಸ ಮಾಡುತ್ತಿದೆ.
ಪ್ರಸ್ತುತ ಕೃಷಿ ವಲಯದ ಬೆಳವಣಿಗೆ ದರ ಶೇ 3.5ರಷ್ಟಿದ್ದು, ವಿಕಸಿತ ಭಾರತದ ನಿರ್ಮಾಣಕ್ಕಾಗಿ ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯವಿದೆ.