
ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಕೃತಕ (ಅನಲಾಗ್) ಪನೀರ್ ತಯಾರಿಕೆ, ಸಂಗ್ರಹ ಮತ್ತು ಮಾರಾಟವನ್ನು ಆಹಾರ ಸುರಕ್ಷತಾ ಇಲಾಖೆ ಒಂದು ವರ್ಷದ ಅವಧಿಗೆ ನಿಷೇಧಿಸಿದೆ.
ಆಹಾರ ಸುರಕ್ಷತಾ ಆಯುಕ್ತ ಕೆ. ಶ್ರೀನಿವಾಸ ಅವರು ಆಗಸ್ಟ್ 17ರಂದು ಈ ಆದೇಶ ಹೊರಡಿಸಿದ್ದು, ಹಾಲಿನ ಕೊಬ್ಬಿನ ಬದಲಿಗೆ ಸಸ್ಯಜನ್ಯ ಎಣ್ಣೆ ಅಥವಾ ಕೊಬ್ಬು ಬಳಸಿ ಪನೀರ್ ತಯಾರಿಸುವುದನ್ನು ನಿರ್ಬಂಧಿಸಲಾಗಿದೆ.
ಈ ನಿಷೇಧವು ಎಫ್ಎಸ್ಎಸ್ಎಐ ಪ್ರಮಾಣೀಕರಿಸಿದ ಡೇರಿ ಉತ್ಪನ್ನಗಳಿಗೆ ಮಾತ್ರ ಅನ್ವಯವಾಗಲಿದ್ದು, ಫ್ರೋಜನ್ ಡಿಸರ್ಟ್ ಮತ್ತು ಸಂಸ್ಕರಿಸಿದ ಚೀಸ್ನಂತಹ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ.