
ಸೆಪ್ಟೆಂಬರ್ 13 ರಿಂದ 17 ರವರೆಗೆ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ 3 ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB) ಬಯಸಿದೆ.
ಪ್ರಸ್ತುತ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ 15 ರಂದು ನಿಗದಿಯಾಗಿರುವ ಎರಡನೇ ಟಿ20 ಪಂದ್ಯವನ್ನು, ಸೆಪ್ಟೆಂಬರ್ 14 ರ ಗಣೇಶ ಚತುರ್ಥಿ ರಜಾದಿನದಂದು ನಡೆಸಲು ಎಸಿಬಿ ಯೋಜಿಸುತ್ತಿದೆ.
ಗಣೇಶ ಚತುರ್ಥಿ ರಜೆಯ ದಿನ ಪಂದ್ಯ ಆಯೋಜಿಸುವುದರಿಂದ ಹೆಚ್ಚಿನ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದು ಟಿಕೆಟ್ ಮಾರಾಟದ ಆದಾಯ ಹೆಚ್ಚಾಗಲಿದ್ದು, ಇದಕ್ಕೆ ಬಿಸಿಸಿಐನ ಅನುಮೋದನೆ ಅಗತ್ಯವಾಗಿದೆ.