
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ನಾಳೆ (ಆಗಸ್ಟ್ 12) ದರ್ಶನ್ ಖುದ್ದು ಹಾಜರಿರಬೇಕೆಂದು ಕೋರಿ ಅವರ ಪರ ವಕೀಲರು 59ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಸಿಆರ್ಪಿಸಿ ಸೆಕ್ಷನ್ 273ರ ಅಡಿಯಲ್ಲಿ ಸಲ್ಲಿಸಲಾದ ಈ ಅರ್ಜಿಯ ಬಗ್ಗೆ ನಾಳೆ ವಾದ ಮಂಡಿಸಲು ನ್ಯಾಯಾಲಯ ಸೂಚಿಸಿದ್ದು, ಸಾಕ್ಷ್ಯ ವಿಚಾರಣೆಯನ್ನು ಮುಂದೂಡಲಾಗಿದೆ.
ಪ್ರಕರಣದ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಹಾಕಿದ್ದು, ದರ್ಶನ್ ಪರ ವಕೀಲರ ಮನವಿಯಂತೆ ಆಗಸ್ಟ್ 18ರವರೆಗೆ ಆ ಹೇಳಿಕೆ ಪಡೆಯದಂತೆ ನ್ಯಾಯಾಲಯ ಆದೇಶಿಸಿದೆ.