
ಮುಂಬೈನ ಜಿಎಸ್ಬಿ ಸೇವಾ ಮಂಡಲವು ಈ ವರ್ಷದ ಗಣೇಶೋತ್ಸವಕ್ಕಾಗಿ ₹703.27 ಕೋಟಿ ಮೊತ್ತದ ಬೃಹತ್ ವಿಮೆಯನ್ನು ಮಾಡಿಸಿದೆ.
ಸೆಪ್ಟೆಂಬರ್ 14ರಿಂದ 18ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಗಣೇಶ ಮೂರ್ತಿಯನ್ನು 66 ಕೆ.ಜಿ. ಚಿನ್ನ ಮತ್ತು 335 ಕೆ.ಜಿ ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗುತ್ತದೆ.
ಮಂಡಲವು ಪ್ರತಿದಿನ 40 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನ್ನದಾನ ಸೇವೆ ನೀಡಲಿದ್ದು, ಭಕ್ತರ ಸುರಕ್ಷತೆ ಮತ್ತು ಭದ್ರತೆಗಾಗಿ ಈ ವಿಮೆ ಮಾಡಿಸಲಾಗಿದೆ ಎಂದು ವಕ್ತಾರ ಅಮಿತ್ ಪೈ ತಿಳಿಸಿದ್ದಾರೆ.