
ಸಿದ್ದರಾಮಯ್ಯನವರ ಆಪ್ತ ವಲಯದ ನಾಯಕರಾದ ಎಚ್.ಸಿ. ಮಹದೇವಪ್ಪ ಮತ್ತು ಸಚಿವ ಭೈರತಿ ಸುರೇಶ್ ನಡುವೆ ಸರ್ಕಾರಿ ನಿವಾಸ ಖಾಲಿ ಮಾಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ.
ತೊಂಬತ್ತು ದಿನಗಳ ನಿಯಮವಿದ್ದರೂ ನಿವಾಸ ಖಾಲಿ ಮಾಡಿಲ್ಲ ಎಂದು ಮಹದೇವಪ್ಪ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಸಿದ್ದರಾಮಯ್ಯನವರ ಆಪ್ತರ ನಡುವಿನ ಆಂತರಿಕ ಫೈಟ್ ಎಂದು ಚರ್ಚೆಯಾಗುತ್ತಿದೆ.
ಭೈರತಿ ಸುರೇಶ್ ಅವರು ಈ ಆರೋಪವನ್ನು ತಳ್ಳಿಹಾಕಿದ್ದು, ತಮಗೆ ಮನೆ ಅಲಾಟ್ ಆಗಿದ್ದು, ಮಹದೇವಪ್ಪ ಅವರು ಸಿಎಂ ಸೂಚಿಸಿದರೆ ಅದೇ ಮನೆಯಲ್ಲಿ ಮುಂದುವರಿಯಬಹುದು ಎಂದು ಸ್ಪಷ್ಟನೆ ನೀಡಿದ್ದಾರೆ.