
ದೇಶದ ಹಲವು ರೈಲ್ವೆ ನಿಲ್ದಾಣಗಳಲ್ಲಿ ಒದಗಿಸಲಾಗುವ ಕುಡಿಯುವ ನೀರಿನಲ್ಲಿ ಅಪಾಯಕಾರಿ ಇ-ಕೋಲೈ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಸಿಎಜಿ ವರದಿಯು ಪ್ರಯಾಣಿಕರ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
2019-20 ರಿಂದ 2023-24ರ ಅವಧಿಯಲ್ಲಿ 5,908 ನಿಲ್ದಾಣಗಳನ್ನು ಪರಿಶೀಲಿಸಿದಾಗ, ಕೊಯಮತ್ತೂರು, ಪಾಲಕ್ಕಾಡ್, ಹೈದರಾಬಾದ್ ಮತ್ತು ಮುಂಬೈನ ಸಿಎಸ್ಎಂಟಿ ಸೇರಿದಂತೆ ಪ್ರಮುಖ ಜಂಕ್ಷನ್ಗಳಲ್ಲಿ ಕಲುಷಿತ ನೀರು ಪತ್ತೆಯಾಗಿದೆ.
ವರದಿಯ ಬೆನ್ನಲ್ಲೇ ಎಚ್ಚೆತ್ತ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ದೇಶದ 20,000 ಕೇಂದ್ರಗಳಲ್ಲಿ ಹೊಸ ಟ್ಯಾಂಕ್ ಟು ಟ್ಯಾಪ್ ವಾಟರ್ ಫಿಲ್ಟ್ರೇಶನ್ ಸಿಸ್ಟಮ್ ಅಳವಡಿಸಲು ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.