
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಯೋಜನೆಗಳಲ್ಲಿ ಪಾರದರ್ಶಕತೆ ತರಲು ಸಚಿವ ಈಶ್ವರ ಖಂಡ್ರೆ ಅವರು 'ಜಲ ಆಸ್ತಿ' ವೆಬ್ ಮತ್ತು ಮೊಬೈಲ್ ಆ್ಯಪ್ ಲೋಕಾರ್ಪಣೆಗೊಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 37 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳಡಿ ನಿರ್ಮಾಣವಾಗುವ 3 ಲಕ್ಷ ಆಸ್ತಿಗಳನ್ನು ಈ ತಂತ್ರಾಂಶದ ಮೂಲಕ ಡಿಜಿಟಲೀಕರಣಗೊಳಿಸಲಾಗುತ್ತಿದೆ.
ಈಗಾಗಲೇ ಮೊದಲ ಹಂತದಲ್ಲಿ 70 ಸಾವಿರಕ್ಕೂ ಅಧಿಕ ಜಲ ಸ್ವತ್ತುಗಳನ್ನು ದಾಖಲಿಸಲಾಗಿದ್ದು, ಬೋರ್ವೆಲ್ ಮತ್ತು ಪೈಪ್ಲೈನ್ಗಳ ಕಾರ್ಯಕ್ಷಮತೆಯನ್ನು ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡಲಿದ್ದಾರೆ.