
ಉಡುಪಿಯ ನಗರ ಪ್ರದೇಶಗಳಲ್ಲಿ ದೈತ್ಯ ಆಫ್ರಿಕನ್ ಬಸವನ ಹುಳುಗಳು ಕಾಣಿಸಿಕೊಂಡಿದ್ದು, ಇವು ತರಕಾರಿ ಮತ್ತು ಸಸ್ಯಗಳನ್ನು ತಿಂದು ಕೃಷಿಗೆ ಭಾರಿ ಹಾನಿ ಉಂಟುಮಾಡುತ್ತಿವೆ.
ಒಂದು ಹೆಣ್ಣು ಬಸವನ ಹುಳು 200ರಿಂದ 300 ಮೊಟ್ಟೆಗಳನ್ನಿಡುವುದರಿಂದ ಇವುಗಳ ಸಂಖ್ಯೆ ವೇಗವಾಗಿ ವೃದ್ಧಿಸುತ್ತಿದ್ದು, ಮನುಷ್ಯರಿಗೆ ಸೋಂಕು ತಗುಲುವ ಭೀತಿಯೂ ಇದೆ.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಪ್ರಕಾರ, ಶೇ 1ರಷ್ಟು ಬೋರ್ಡೊ ಮಿಶ್ರಣಕ್ಕೆ ಉಪ್ಪು ಸೇರಿಸಿ ತಯಾರಿಸಿದ ದ್ರಾವಣದಿಂದ ಇವುಗಳನ್ನು ನಿಯಂತ್ರಿಸಬಹುದಾಗಿದೆ.