
ಆಹಾರ ಇಲಾಖೆ ಅಧಿಕಾರಿಗಳು ವಿಕಾಸಸೌಧದ ಮೊದಲ ಮಹಡಿಯ ಕ್ಯಾಂಟೀನ್ ಮೇಲೆ ದಾಳಿ ನಡೆಸಿ, ನೈರ್ಮಲ್ಯದ ಕೊರತೆಯಿಂದಾಗಿ ಅದನ್ನು ಸೀಜ್ ಮಾಡಿದ್ದಾರೆ.
ತಟ್ಟೆಗಳನ್ನು ಇಡುವ ಜಾಗದಲ್ಲಿ ಜಿರಳೆಗಳು ಮತ್ತು ಆಹಾರ ನೀಡುವ ಅಡಕೆ ಪ್ಲೇಟ್ಗಳ ಮೇಲೆ ಫಂಗಸ್ ಪತ್ತೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅವಧಿ ಮುಗಿದ ಪದಾರ್ಥಗಳ ಬಳಕೆ ಮತ್ತು ಪೆಸ್ಟ್ ಕಂಟ್ರೋಲ್ ಮಾಡದಿರುವ ನಿಯಮ ಉಲ್ಲಂಘನೆಗಳು ಕಂಡುಬಂದಿದ್ದರಿಂದ ಕ್ಯಾಂಟೀನ್ ಅನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.