
ಬೆಳಗಾವಿ ಜಿಲ್ಲೆಯ ರಾಮದುರ್ಗದ ಐದು ಎಕರೆ ಮೀಸಲು ಅರಣ್ಯದಲ್ಲಿ ನಿಯಮಬಾಹಿರವಾಗಿ ಯೋಗ, ಧ್ಯಾನ ಮತ್ತು ಶಿಕ್ಷಣ ಕೇಂದ್ರ ನಿರ್ಮಿಸಿದ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಪರಿಸರ ಸಚಿವಾಲಯ ಆದೇಶಿಸಿದೆ.
ಅಕ್ರಮ ಕಾಮಗಾರಿಗಾಗಿ ರಾಮದುರ್ಗದ ಶಿವ ಪ್ರತಿಷ್ಠಾಪನಾ ಸೇವಾ ಸಮಿತಿಯ ವಿರುದ್ಧ ಅರಣ್ಯ ಇಲಾಖೆ 2017ರಲ್ಲೇ ಎಫ್ಐಆರ್ ದಾಖಲಿಸಿದ್ದು, ಈ ಯೋಜನೆಯ ಪ್ರಸ್ತಾವವನ್ನು ಕೇಂದ್ರವು 2018ರ ಜೂನ್ನಲ್ಲಿ ತಿರಸ್ಕರಿಸಿತ್ತು.
ಪ್ರದೀಪ್ ಎಂ. ಪಟ್ಟಣ ಅಧ್ಯಕ್ಷರಾಗಿರುವ ಶಾರದಾ ದೇವಿ ಎಜುಕೇಷನಲ್ ಸೊಸೈಟಿಯು ಈ ಜಾಗದಲ್ಲಿ 72 ಅಡಿ ಎತ್ತರದ ಶಿವನ ಪ್ರತಿಮೆ ಹಾಗೂ 22 ಅಡಿ ಎತ್ತರದ ನಂದಿಯ ಪ್ರತಿಮೆಯನ್ನು ನಿರ್ಮಿಸಿದೆ.