
ಮಧುಗಿರಿ ತಾಲ್ಲೂಕಿನ ಮೈದನಹಳ್ಳಿ ಕೃಷ್ಣಮೃಗ ವನ್ಯಧಾಮದ 70 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ, ಅಮಟೆ ಮತ್ತು ಹುರುಳಿ ಬಿತ್ತನೆ ಮಾಡಲಾಗಿದೆ.
ಕೃಷ್ಣಮೃಗಗಳು ಆಹಾರಕ್ಕಾಗಿ ವನ್ಯಧಾಮದಿಂದ ಹೊರಬಂದು ರೈತರ ಬೆಳೆ ನಾಶ ಮಾಡುವುದನ್ನು ತಡೆಯಲು ಮತ್ತು ರಸ್ತೆ ಅಪಘಾತಗಳನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ವನ್ಯಧಾಮದ ಒಳಗೆಯೇ ಪೌಷ್ಟಿಕ ಆಹಾರ ಲಭ್ಯವಾಗುವುದರಿಂದ ಕೃಷ್ಣಮೃಗಗಳು ವಲಸೆ ಹೋಗುವುದು ಕಡಿಮೆಯಾಗಲಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.