
ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಮೋನಿಕಾ ಆರ್ಯ, 12 ವರ್ಷಗಳ ಅಂತರದ ನಂತರ ಓದಿ 2022ರಲ್ಲಿ ಎಂಎಸ್ಸಿ ಪದವಿ ಪಡೆದು ಜಾರ್ಖಂಡ್ನಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತಿದ್ದಾರೆ.
2021ರಲ್ಲಿ ಖುಂಟಿ ಜಿಲ್ಲೆಯ ಟೊರ್ಪಾ ಬ್ಲಾಕ್ನಲ್ಲಿ 'ಸಂಭವ್ ಟ್ರಸ್ಟ್' ಸ್ಥಾಪಿಸಿದ ಅವರು, ಬುಡಕಟ್ಟು ಮಕ್ಕಳ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನಕ್ಕಾಗಿ ಶ್ರಮಿಸುತ್ತಿದ್ದಾರೆ.
ಈ ಸಂಸ್ಥೆಯ ಮೂಲಕ 500ಕ್ಕೂ ಹೆಚ್ಚು ಮಕ್ಕಳು ಸಬಲೀಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, 5,000 ಮಕ್ಕಳಿಗೆ ಹಕ್ಕುಗಳ ಅರಿವು ಮತ್ತು 1,000 ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲಾಗಿದೆ.