
ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಮುಂಬರುವ 2026-27ರ ರಣಜಿ ಟ್ರೋಫಿ ಟೂರ್ನಿಗೆ ಹೈದರಾಬಾದ್ ಪುರುಷರ ತಂಡದ ನಾಯಕರಾಗಿ ಹೆಚ್ಸಿಎ ನೇಮಕ ಮಾಡಿದೆ.
ಎಡಗೈ ವೇಗಿ ಚಾಮಾ ಮಿಲಿಂದ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದ್ದು, ಸಿರಾಜ್ ಲಭ್ಯವಿಲ್ಲದ ಅವಧಿಯಲ್ಲಿ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
2026-27ರ ರಣಜಿ ಟೂರ್ನಿಯು ಅಕ್ಟೋಬರ್ 11ರಿಂದ ಆರಂಭವಾಗಲಿದ್ದು, ಹೈದರಾಬಾದ್ ತಂಡವು ಮೊದಲ ಪಂದ್ಯದಲ್ಲಿ ತ್ರಿಪುರಾವನ್ನು ಎದುರಿಸಲಿದೆ.