
ಉಡುಪಿ ತಾಲೂಕಿನ ಕೆಮ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಲಿ ಪ್ರದೇಶದಲ್ಲಿ ರಾಸಾಯನಿಕ ಬಳಸಿ ಬಾಳೆಕಾಯಿಗಳನ್ನು ಕೃತಕವಾಗಿ ಹಣ್ಣು ಮಾಡುತ್ತಿದ್ದ ಗೋದಾಮುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಹಾಯಕ ಕಮಿಷನರ್ ಎಸ್.ಆರ್. ರಶ್ಮಿ ಮತ್ತು ಆರೋಗ್ಯ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 5,000 ಕೆಜಿ ಹಾನಿಕಾರಕ ಬಾಳೆಹಣ್ಣುಗಳು, ಸಾಗಾಟದ ವಾಹನ ಮತ್ತು ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆದಿ ಉಡುಪಿ ಮಾರುಕಟ್ಟೆಯ ವ್ಯಾಪಾರಿಗಳು ನೈಸರ್ಗಿಕವಾಗಿ 24 ಗಂಟೆಗಳಲ್ಲಿ ಹಣ್ಣು ಮಾಡುತ್ತಿದ್ದರೆ, ಈ ಕಳ್ಳ ದಂಧೆಕೋರರು ತ್ವರಿತ ಲಾಭಕ್ಕಾಗಿ ಮನೆಗಳಲ್ಲೇ ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡುತ್ತಿದ್ದರು.