
ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಮತ್ತೊಬ್ಬರು ಮೃತಪಡುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 98ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಶಿವಸಾಗರ, ಲಖಿಂಪುರ ಮತ್ತು ಗೋಲಾಘಾಟ್ ಸೇರಿದಂತೆ 13 ಜಿಲ್ಲೆಗಳ 464 ಗ್ರಾಮಗಳು ಬಾಧಿತವಾಗಿದ್ದು, ಒಟ್ಟು 1,55,849 ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯ ಸರ್ಕಾರವು 55 ಪರಿಹಾರ ಶಿಬಿರಗಳನ್ನು ತೆರೆದು 10 ಸಾವಿರಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಿದ್ದು, 10,748 ಹೆಕ್ಟೇರ್ ಬೆಳೆ ಪ್ರದೇಶ ಮತ್ತು 47 ಸಾವಿರ ಜಾನುವಾರುಗಳು ಪ್ರವಾಹದಿಂದ ಬಾಧಿತವಾಗಿವೆ.