ನೇಪಾಳದ ಬೋಟೆಕೋಶಿ–ತ್ರಿಶೂಲಿ ನದಿ ಕಾರಿಡಾರ್ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಮಳೆಯಲ್ಲ, ಬದಲಾಗಿ ಬೃಹತ್ ಹಿಮ ಬಂಡೆಗಳ ಕುಸಿತವೇ ಮುಖ್ಯ ಕಾರಣ ಎಂದು ನೇಪಾಳ ಪರಿಸರ ಸೊಸೈಟಿ ವರದಿ ತಿಳಿಸಿದೆ.
ಆಗಸ್ಟ್ 26ರಂದು 5,200 ಮೀಟರ್ ಎತ್ತರದಿಂದ ಕುಸಿದ ಮಂಜಿನ ಬಂಡೆಗಳು ಪ್ರತಿ ಸೆಕೆಂಡಿಗೆ 46.3 ಮೀಟರ್ ವೇಗದಲ್ಲಿ ಹರಿದು 10 ಕಿ.ಮೀ ವ್ಯಾಪ್ತಿಯಲ್ಲಿ ಭೌಗೋಳಿಕ ಬದಲಾವಣೆಗಳನ್ನು ಉಂಟುಮಾಡಿದೆ.
ಈ ಪ್ರವಾಹದಿಂದ 13 ಜಲವಿದ್ಯುತ್ ಘಟಕಗಳು ಮತ್ತು ಒಂದು ಸೌರವಿದ್ಯುತ್ ಘಟಕ ನಾಶವಾಗಿದ್ದು, ಪ್ರಾಥಮಿಕ ಅಂದಾಜಿನ ಪ್ರಕಾರ 3 ಟ್ರಿಲಿಯನ್ ರೂಪಾಯಿಯಷ್ಟು ಆಸ್ತಿ ನಷ್ಟ ಸಂಭವಿಸಿದೆ.