
ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತರಕಾರಿಗಳ ಬೆಲೆ ಗಗನಕ್ಕೇರಿದ್ದು, 30-40 ರೂಪಾಯಿ ಇದ್ದ ತರಕಾರಿಗಳು ಈಗ 60-80 ರೂಪಾಯಿಗೆ ಏರಿಕೆಯಾಗಿವೆ.
ಬೆಳ್ಳುಳ್ಳಿ 230-250 ರೂ., ಶುಂಠಿ 120-130 ರೂ. ಮತ್ತು ಬೀನ್ಸ್ 100-110 ರೂ.ಗೆ ಮಾರಾಟವಾಗುತ್ತಿದ್ದು, ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಬೆಳೆ ಸರಿಯಾಗಿ ಬಾರದ ಕಾರಣ ಮಾರುಕಟ್ಟೆಯಲ್ಲಿ ತರಕಾರಿಗಳ ಪೂರೈಕೆ ಕಡಿಮೆಯಾಗಿದ್ದು, ಬೆಲೆಗಳು ಸೆಂಚುರಿ ಬಾರಿಸುವ ಹಂತ ತಲುಪಿವೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.