
ಉತ್ತರಾಖಂಡದ ನೀತಿ ಕಣಿವೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಯಲ್ಲಿ ಪ್ರವಾಹ ಉಂಟಾಗಿ, ಬಿಆರ್ಒ ನಿರ್ಮಿತ ಲೋಹದ ಸೇತುವೆ ಕೊಚ್ಚಿಹೋಗಿದೆ.
ಸೇತುವೆ ಕುಸಿಯುವ ಕೆಲವೇ ಕ್ಷಣಗಳ ಮೊದಲು ರಸ್ತೆಯಲ್ಲಿ ಸಂಚರಿಸುತ್ತಿದ್ದ ಟ್ರಕ್ ಮತ್ತು ಕಾರು ಚಾಲಕರು ಚಾಣಾಕ್ಷತನದಿಂದ ಹಿಂತಿರುಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯಿಂದಾಗಿ ಗಡಿ ಪ್ರದೇಶದ ಮುಖ್ಯ ಪಟ್ಟಣದೊಂದಿಗಿನ ರಸ್ತೆ ಸಂಪರ್ಕವು ಸಂಪೂರ್ಣವಾಗಿ ಕಡಿತಗೊಂಡಿದೆ.