
ತಿಪಟೂರು ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿಯಿಂದಾಗಿ ಜುಲೈ 27ರಿಂದ ಆಗಸ್ಟ್ 20ರವರೆಗೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಯಶವಂತಪುರ-ಸಿಂಧನೂರು ಎಕ್ಸ್ಪ್ರೆಸ್ 90 ನಿಮಿಷ ಮತ್ತು ಸಾಯಿನಗರ ಶಿರಡಿ-ಮೈಸೂರು ಎಕ್ಸ್ಪ್ರೆಸ್ ರೈಲು 110 ನಿಮಿಷಗಳ ಕಾಲ ಮಾರ್ಗಮಧ್ಯೆ ತಡೆಹಿಡಿಯಲ್ಪಡಲಿವೆ.
ಪ್ರಯಾಣಿಕರು ರೈಲುಗಳ ನಿಖರ ಸಮಯಕ್ಕಾಗಿ ಸಹಾಯವಾಣಿ ಸಂಖ್ಯೆ 139 ಅಥವಾ ನ್ಯಾಷನಲ್ ಟ್ರೈನ್ ಎನ್ಕ್ವೈರಿ ಸಿಸ್ಟಮ್ ಅನ್ನು ಸಂಪರ್ಕಿಸಲು ರೈಲ್ವೆ ಇಲಾಖೆ ಸೂಚಿಸಿದೆ.