
ಭಾರತ ಮತ್ತು ಶ್ರೀಲಂಕಾ ನಡುವಿನ ನಿರ್ಣಾಯಕ ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23ರಂದು ಕೊಲಂಬೊದಲ್ಲಿ ಆರಂಭವಾಗಲಿದ್ದು, ಲಂಕಾ ತಂಡದಲ್ಲಿ ಇಬ್ಬರು ಆಟಗಾರರನ್ನು ಬದಲಿಸಲಾಗಿದೆ.
ಕುಸಲ್ ಮೆಂಡಿಸ್ ಗಾಯದಿಂದ ಮತ್ತು ದಿನೇಶ್ ಚಾಂಡಿಮಲ್ ಐಸಿಸಿ ನಿಯಮಗಳಿಂದ ಹೊರಬಿದ್ದಿದ್ದು, ಅವರ ಬದಲಿಗೆ ಕಮಿಲ್ ಮಿಶಾರ ಮತ್ತು ಸಹನ್ ಅರಾಚಿಗೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಸಹನ್ ಅರಾಚಿಗೆ ಭಾರತ ಎ ವಿರುದ್ಧದ ಅನಧಿಕೃತ ಟೆಸ್ಟ್ನಲ್ಲಿ 127 ರನ್ ಗಳಿಸಿದ್ದರೆ, ಕಮಿಲ್ ಮಿಶ್ರಾ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವಕಾಶ ಪಡೆದಿದ್ದಾರೆ.